ದಿನಾಂಕ: 27.11.2024 ರಂದು ಬೆಳಗಿನ 02:30 ಗಂಟೆಯಿಂದ 03:00 ಗಂಟೆಯ ನಡುವಿನ ಅವಧಿಯಲ್ಲಿ ಯಂಕಂಚಿ ಗ್ರಾಮದ ಸಾತವ್ವ ವಿಠಲ ಕಂಬಾರ, 61 ವರ್ಷ, ನಿವೃತ್ತ ಶಿಕ್ಷಕಿ ಇವರು ತಮ್ಮ ಮನೆಯಲ್ಲಿ ಮಲಗಿದ್ದಾಗ ಯಾರೋ ಇಬ್ಬರು ಮನೆಯೊಳಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಅವರಿಂದ 6,000/- ನಗದು ಹಣ, 50ಗ್ರಾಂ ನ ಬಂಗಾರದ 02 ಬಳೆಗಳು (ಪಾಟಲಿ), 50ಗ್ರಾಂ ನ ಬಂಗಾರದ 04 ಬಳೆಗಳು (ಬಿಲ್ವರ್), ಒಟ್ಟು 6,00,000/- ಮೌಲ್ಯದ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸಾತವ್ವ ವಿಠಲ ಕಂಬಾರ ನೀಡಿದ ದೂರಿನ ಮೇರೆಗೆ ಸಿಂದಗಿ ಪೊಲೀಸ್ ಠಾಣೆ ಗುನ್ನೆ ನಂ: 273/2024 ಕಲಂ: 309(4) ಬಿಎನ್ಎಸ್-2023 ಅಡಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಲಕ್ಷ್ಮಣ ನಿಂಬರಗಿ, ಐಪಿಎಸ್ ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಹಾಗೂ ಜಗದೀಶ ಎಚ್.ಎಸ್. ಡಿಎಸ್ಪಿ ಇಂಡಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ನಾನಾಗೌಡ ಪೊಲೀಸ್ ಪಾಟೀಲ, ಸಿಪಿಐ ಸಿಂದಗಿ ವೃತ್ತ ರವರ ನೇತೃತ್ವದಲ್ಲಿ ಸಿಂದಗಿ ಪೊಲೀಸ್ ಠಾಣೆಯ ಆರೀಫ್ ಮುಶಾಪುರಿ, ಪಿಎಸ್ಐ (ಎಲ್&ಓ), ಜೆ.ಎಸ್.ಗಲಗಲಿ, ಎಎಸ್ಐ ಹಾಗೂ ಸಿಬ್ಬಂದಿ ಜನರಾದ ಆರ್.ಎಲ್.ಕಟ್ಟಿಮನಿ, ಸಿಎಚ್ ಸಿ-480. ಪಿ.ಕೆ.ನಾಗರಾಳ, ಸಿಎಚ್ ಸಿ-504, ಎಸ್.ಎನ್.ಬಿರಾದಾರ, ಸಿಪಿಸಿ-1096, ಎಂ.ಎಚ್.ಹೊಸಮನಿ, ಸಿಪಿಸಿ-1742, ವಾಯ್.ಕೆ.ಉಕುಮನಾಳ, ಸಿಪಿಸಿ-1230, ಪಿ.ಕೆ.ಗೊರವಗುಂಡಗಿ, ಸಿಪಿಸಿ-1703, ಉಮೇಶ ನನಶೆಟ್ಟಿ, ಸಿಪಿಸಿ-683, ಬಿ. ಎನ್.ಕೊಳೂರ, ಸಿಪಿಸಿ-1054, ಎಚ್.ಟಿ.ಗೋಡೆಕರ, ಸಿಪಿಸಿ-667, ಎಸ್.ಎಸ್.ಕೊಂಡಿ, ಸಿಪಿಸಿ-1695, ಬಿ.ಜಿ.ಮುಳಸಾವಳಗಿ, ಸಿಪಿಸಿ-1752 ಇವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಶೊದಕಾರ್ಯ ಪ್ರಾರಂಭಿಸಿದರು ತನಿಖಾ ತಂಡವು ದಿನಾಂಕ: 30.04.2025 ರಂದು ಬೆಳಗ್ಗೆ 07:00 ಗಂಟೆ ಸುಮಾರಿಗೆ ಖಚಿತ ಮಾಹಿತಿಯನ್ನು ಆಧರಿಸಿ ಚಾಂದಕವಟೆ ಗ್ರಾಮದ ಹತ್ತಿರ ಆರೋಪಿತನಾದ ಪ್ರಶಾಂತ ಸಿದ್ದಾರಾಮ ನಾವಿ, 31 ವರ್ಷ, ಸಾ: ದೇವರ ನಿಂಬರಗಿ,
ಈತನಿಗೆ ವಶಕ್ಕೆ ಪಡೆದು ಆರೋಪಿತನ ಅಂಗ ಶೋಧನೆ ಮಾಡಿದಾಗ ಆತನ ಬಳಿ 01 ಕಂಟ್ರಿ ಪಿಸ್ತೂಲ್ ಹಾಗೂ 04 ಸಜೀವ ಗುಂಡುಗಳು ದೊರೆತಿವೆ. ಆರೋಪಿತನಿಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಯಂಕಂಚಿ ಗ್ರಾಮದಲ್ಲಿ ಸುಲಿಗೆ ಮಾಡಿದ ಬಂಗಾರದ ಆಭರಣಗಳನ್ನು ಇಂಡಿ ಮುತ್ತೂಟ್ ಫೈನಾನ್ಸ್ ಹಾಗೂ ಡಿಸಿಸಿ ಬ್ಯಾಂಕ್ನಲ್ಲಿ ಅಡ ಇಟ್ಟಿರುವುದಾಗಿ ಅಲ್ಲದೇ ಮಧ್ಯಪ್ರದೇಶ ರಾಜ್ಯದಿಂದ ಇನ್ನೂ 02 ಕಂಟ್ರಿ ಪಿಸ್ತೂಲ್ಗಳನ್ನು ತಂದ್ದು, ಅವುಗಳನ್ನು ಮುಚ್ಚಿ ಇಟ್ಟಿರುವುದಾಗಿ ಮಾಹಿತಿ ನೀಡಿರುತ್ತಾನೆ.
ಆರೋಪಿತನ ಹತ್ತಿರ ಅಂಗ ಶೋಧನೆ ಕಾಲಕ್ಕೆ ಅಕ್ರಮ ಶಸ್ತ್ರಾಸ್ತ್ರ ದೊರೆತಿದ್ದರಿಂದ ಆತನ ಮೇಲೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 119/2025 ಕಲಂ: 25(ಎ) ಆರ್ಮ್ಸ್ ಆ್ಯಕ್ಟ್-1959 ಅಡಿ ಪ್ರತ್ಯೇಕ ದೂರು ದಾಖಲಿಸಲಾಗಿದೆ.
ಸುಲಿಗೆ ಪ್ರಕರಣದಲ್ಲಿ ತನಿಖೆ ಕೈಕೊಂಡು ಇಂಡಿ ಮುತ್ತೂಟ್ ಫೈನಾನ್ಸ್ ಹಾಗೂ ಡಿಸಿಸಿ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ 50 ಗ್ರಾಂ ನ ಬಂಗಾರದ 2 ಬಳೆಗಳು (ಪಾಟಲಿ), 20 ಗ್ರಾಂ ನ ಬಂಗಾರದ 2 ಬಳೆಗಳು (ಬಿಲ್ವರ್) ಒಟ್ಟು 70 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಂತರ ಹೆಚ್ಚಿನ ವಿಚಾರಣೆಗಾಗಿ ಆರೋಪಿತನಿಗೆ ಪೊಲೀಸ್ ಕಸ್ಟಡಿಗೆ ಪಡೆದು ಆತನ ಹೇಳಿಕೆ ಆಧಾರದ ಮೇಲೆ ದೇವರ ನಿಂಬರಗಿ ಗ್ರಾಮದ ಆತನ ಮನೆಯಲ್ಲಿ ಮುಚ್ಚಿಟ್ಟಿದ್ದ 02 ಕಂಟ್ರಿ ಪಿಸ್ತೂಲ್ ಹಾಗೂ 08 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಹೀಗೆ ಆರೋಪಿತನಾದ ಪ್ರಶಾಂತ ಸಿದ್ದಾರಾಮ ನಾವಿ, ಈತನಿಂದ ಸುಲಿಗೆ ಮಾಡಿದ್ದ 70 ಗ್ರಾಂ ಬಂಗಾರದ ಆಭರಣಗಳು ಹಾಗೂ 03 ಕಂಟ್ರಿ ಪಿಸ್ತೂಲ್ 12 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಪ್ರಕರಣವು ತನಿಖೆಯಲ್ಲಿದೆ.
ಲಕ್ಷ್ಮಣ ನಿಂಬರಗಿ, ಐಪಿಎಸ್
ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ.

